ನಾವುಂದ: ಗ್ರಾಮದ ಮಸ್ಕಿ ಚಾತನಕೆರೆ ಎಂಬಲ್ಲಿ ನಾವುಂದದಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಕ್ರೇನ್ ಡಿಕ್ಕಿ ಹೊಡೆದು ಸೈಕಲ್ ಸವಾರ ಚಂದ್ರ ಅವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಸೈಕಲ್ ಸವಾರ ಚಂದ್ರ ಅವರ ತಲೆಗೆ ಗಂಭೀರ ಏಟು ತಗುಲಿದ್ದು ಆಸ್ಪತ್ರೆಗೆ ಸಾಗುವ ಹಾದಿಯಲ್ಲಿ ಅಸುನೀಗಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.