ಸಿದ್ದಾಪುರ: ಕುಂದಾಪುರ ತಾಲೂಕು ಸಿದ್ದಾಪುರ ಸಮೀಪದ ಹೆಗೋಡ್ಲುವಿನ ಮನೆಯೊಂದರಲ್ಲಿ ಹಸುಗಳನ್ನು ಕಡಿದು, ಆಕ್ರಮವಾಗಿ ಗೋ ಮಾಂಸ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಬುಧವಾರ ಸಂಜೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ ಸುಮಾರು 26 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹೊಸಂಗಡಿ ಗ್ರಾಮದ ಹೆಗೋಡ್ಲುನಲ್ಲಿ ಕೇರಳ ಮೂಲದವರು ಇತ್ತೀಚಿಗೆ ಜಾಗ ಖರೀದಿಸಿದ್ದು, ಇಲ್ಲಿ ಆಕ್ರಮವಾಗಿ ಗೋವುಗಳನ್ನು ಕಡಿದು ಮಾಂಸಗಳನ್ನು ಮಾಡುತ್ತಿರುವ ಬಗ್ಗೆ ಶಂಕರನಾರಾಯಣ ಪೊಲೀಸರಿಗೆ ದೂರುಗಳು ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಬುಧವಾರ ಪೊಲೀಸರು ದಾಳಿ ನಡೆಸಿದ್ದಾಗ ಸುಮಾರು 26 ಕೆ.ಜಿ. ಗೋಮಾಂಸ ಹಾಗೂ ಹತ್ಯೆಗೆ ಬಳಸಿದ ಪರಿಕರಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲಕ ಆಶ್ರಫ್ ಹಾಗೂ ಶಂಕರ ಅವರನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡ ಘಟನೆಯು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.