ಮುಜಫರನಗರ: ಜಿಲ್ಲೆಯ ಹುಸೇನಪುರ ಗ್ರಾಮದಲ್ಲಿ ಪತಿ ಮಹಾಶಯನೋರ್ವ ತನ್ನ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸದಿರುವ ಕಾರಣಕ್ಕೆ ತನ್ನ ಪತ್ನಿಯನ್ನು ಜೀವಂತ ಸುಟ್ಟು ಹಾಕಿದ್ದಾನೆ.
ವರದಕ್ಷಿಣೆ ಪೀಡನೆಗೆ ಬಲಿಯಾಗಿರುವ ಮಹಿಳೆಯನ್ನು ದೀಪಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರು ಆಕೆಯ ಪತಿ ಕಲ್ಲು ಹಾಗೂ ಮಾಸ ಸುಖಪಾಲ್ ವಿರುದ್ಧ ಕೊಲೆ ಕೇಸನ್ನು ದಾಖಲಿಸಿಕೊಂಡಿದ್ದಾರೆ.
ಮೃತ ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಪತಿ ಹಾಗೂ ಮಾವ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರ ಹುಡುಕಾಟ ನಡೆದಿದೆ.