ಕುಂದಾಪುರ: ಕೊಲ್ಲೂರಿಗೆ ತೆರಳುತ್ತಿದ್ದ ಕೇರಳ ಮೂಲದ ಯಾತ್ರಿಕರ ದರೋಡೆಗೆ ಯತ್ನಿಸಿದ್ದ ಐವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳಾದ ಮಂಗಳೂರು ವಾಮಂಜೂರಿನ ನಿವಾಸಿ ಸೈಫುದ್ದೀನ್(19), ಫೈಜಲ್(20), ಮೂಡುಶೆಡ್ಡೆಯ ಮಹಮದ್ ರಿಜ್ವಾನ್(26), ಮಹಮದ್ ಆಲಿ ಶಾನೂರ್(21) ಹಾಗೂ ಹರ್ಷಿತ್(21) ಎಂಬವರನ್ನು ಮಂಗಳವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.