ಕುಂದಾಪುರ : ವಡೇರಹೋಬಳಿ ಗ್ರಾಮದ ಟಿಟಿ ರಸ್ತೆಯ ಬಳಿ ಅಂದರ್ ಬಾಹರ್ ಇಸ್ಪಿಟು ಜುಗಾರಿ ನಡೆಸುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಡೇರಹೋಬಳಿಯ ಟಿ.ಟಿ.ರಸ್ತೆಯ ನಿವಾಸಿಗಳಾದ ಅನ್ವರ್, ರಜಾಕ್, ಹಬೀಬ ಹಾಗೂ ಕೋಡಿಯ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಜುಗಾರಿಗೆ ಬಳಸಿದ್ದ ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.