ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಫೆ. 13ರಿಂದ 16ರ ವರೆಗೆ ನಡೆಯುವ ಬ್ರಹ್ಮರಥೋತ್ಸವದ ಪೂರ್ವಭಾವಿಯಾಗಿ ಶ್ರೀ ದೇವಿಗೆ ವಸಂತ ಮಂಟಪದಲ್ಲಿರಿಸಲು ಕುಳಾವಿ ಭಜಕ ಬಾಂಧವರಿಂದ ಕೊಡಲ್ಪಟ್ಟ 'ರಜತ ಸಿಂಹಾಸನ'ದ ವಿದ್ಯುಕ್ತ ಸಮರ್ಪಣೆ ಫೆ. 13ರಂದು ಜರಗಲಿದೆ.
ರಜತ ಸಿಂಹಾಸನವನ್ನು ಫೆ. 11ರಂದು ಸಂಜೆ 4ಕ್ಕೆ ಕುಂಭಾಶಿ ಗಣೇಶ್ ಪ್ರಭುಗಳ ನಿವಾಸದಿಂದ ಕೋಟೇಶ್ವರ ಕುಂದಾಪುರ ಪೇಟೆ ಮಾರ್ಗವಾಗಿ ಬಸ್ರೂರು ಶ್ರೀ ದೇವಳಕ್ಕೆ ವಿವಿಧ ವಾದ್ಯಘೋಷಗಳಿಂದ ವೈಭವೋಪೇತ ಮೆರವಣಿಗೆಯಲ್ಲಿ ತರಲಾಗುವುದು. ದೇವಾಲಯದ ಬ್ರಹ್ಮರಥೋತ್ಸವ ಫೆ. 15ರಂದು ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com