ಕುಂದಾಪುರ: ಇಲ್ಲಿನ ಜುವೆಲ್ಲರ್ಸ್ ಅಸೋಸಿಯೇಶನ್ ನ 9ನೇ ವರ್ಷದ ಪದಪ್ರದಾನ ಸಮಾರಂಭ ಭಾನುವಾರ ಹೋಟೆಲ್ ಶರೋನ್ ನಲ್ಲಿ ಜರುಗಿತು.
ಗಂಗೊಳ್ಳಿ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿಯು ಸೊಸೈಟಿಯ ಅಧ್ಯಕ್ಷ ರಾಜು ದೇವಾಡಿಗ ಮುಖ್ಯ ಅತಿಥಿಯಾಗಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಶುಭಶಂಸನೆಗೈದರು.
ಜುವೆಲ್ಲರ್ಸ್ ಅಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ. ಸದಾನಂದ ಶೇಟ್, ಕಾರ್ಯದರ್ಶಿ ರಾಜಶೇಖರ್ ಆಚಾರ್ಯ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೂತನ ಪದಾದಿಕಾರಿಗಳನ್ನು ಅಭಿನಂದಿಸಲಾಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com